ಮನಸ್ಸು-ಕಡಲು

ಹುಟ್ಟು ಎಲ್ಲೊ ಹರಿವುದೆಲ್ಲೂ
ಸೇರುವುದೊಂದೆ ಕಡಲಿಗೆ
ನೀರು ಯಾವ ನದಿಯದಾದರೇನು
ಕಡಲ ಒಡಲಿಗಿಲ್ಲ ಭೇದಭಾವ
ಹರಿದು ಬಂದುದೆಲ್ಲ ಸ್ವಾಹಾ!

ಹುಟ್ಟುವಾಗ ಎಲ್ಲರೊಂದೆ
ಬೆಳೆಯುವಾಗ ಹಲವು ಜಾತಿ ಹಲವು ಮತ
ಸತ್ತ ಮೇಲೆ ಒಂದೇ ಕಾಟ
ನಡುವೆ ಏಕೆ ಅಂತಃಕಲಹ?

ದೇವರಿಗಿಲ್ಲ ಮೇಲು ಕೀಳು
ಯಮನಿಗಿಲ್ಲ ಭೇದಭಾವ
ಕಾಮನಿಗಿಲ್ಲ ಜಾತಿ ಮತ
ಮನುಜಗೇಕೆ ಕುಲದ ಹಲುಬು
ಸಣ್ಣ ದೃಷ್ಟಿ ಭೇದಭಾವ ಸೃಷ್ಟಿ?

ಮನಸ್ಸು ಕಡಲು ಆದರೆ
ಎಲ್ಲ ಅಲೆಯು ಬೆರೆಯುವಂತೆ
ಮನುಜರೆಲ್ಲ ಬೆರೆತರೆ
ನಾವು ನೀವು ಅವರು ಇವರು ಎಲ್ಲರೊಂದೆ
ಎಲ್ಲರದ್ದೂ ಮನುಜ ಕುಲವು
ಮಾನವೀಯ ಧರ್ಮವು.
ಉಳಿವುದೊಂದೆ ವಿಶ್ವಪಥವು
ಕಡಲು ಮೆರೆವ ತಾದಾತ್ಮ್ಯ ಭಾವವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
Next post ನೆರೆ ಹೊರೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys